ನಮ್ಮ ಪ್ರಮುಖ ಯೋಜನೆಗಳು

ಕ್ರಮ ಸಂಖ್ಯೆ ಕೈಗಾರಿಕೋದ್ಯಮ ಪ್ರದೇಶ ಮತ್ತು ಜಿಲ್ಲೆ ಟಿಪ್ಪಣಿ
1. ಉಚ್ಛ ತಾಂತ್ರಿಕ ಹೈಟೆಕ್ ರಕ್ಷಣಾ ಮತ್ತು ಅಂತರಿಕ್ಷ ಉದ್ಯಾನ,ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿಕೊಂಡಂತೆ ಇರುವ ಉಚ್ಛ ತಾಂತ್ರಿಕ – – ಹೈಟೆಕ್ ರಕ್ಷಣಾ ಮತ್ತು ಅಂತರಿಕ್ಷ ಉದ್ಯಾನ, ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆ ಉದ್ಯಾನವನ್ನು 2980 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಕೈಗಾರಿಕೋದ್ಯಮ ಪ್ರದೇಶವು NH17 ರಿಂದ ಸುಮಾರು 9 ಕಿ.ಮೀ ಮತ್ತು ಬೆಂಗಳೂರು ನಗರದಿಂದ 31 ಕಿ.ಮೀ ದೂರದಲ್ಲಿದೆ.ಈ ಕೈಗಾರಿಕೋದ್ಯಮ ಪ್ರದೇಶ ರೈಲ್ವೆ ನಿಲ್ದಾಣದ ಸಂಪರ್ಕ ಹೊಂದಿದ್ದು, ಇದು (ದೊಡ್ಡ ಜಾಲ) ಸುಮಾರು 9 ಕಿ.ಮೀ ಅಂತರದಲ್ಲಿದೆ. ಈ ಕೈಗಾರಿಕೋದ್ಯಮ ಪ್ರದೇಶವು ಬಹಳಷ್ಟು ಮಾರ್ಗಗಳಿಗೆ ವಿದ್ಯುತ್ ಶಕ್ತಿ ಸರಬರಾಜಿಗೆ ಭೂಗತ ಮಾರ್ಗವು ಸೇರಿದಂತೆ ಈ ಪ್ರದೇಶ ಬೀದಿ ದೀಪ ಮತ್ತು ಉಭಯ ನೀರು ಸರಬರಾಜಿಗೆ ಪೈಪ್ ಲೈನನ್ನು ಹೊಂದಿದೆ. ಇಲ್ಲಿಂದ ನೀರು ಸಾಗಿಸಲು ಅನುಕೂಲಕರವಾಗಿದೆ. ತಡೆರಹಿತ 220- -66- -11 ಕೆ.ವಿ ಉಪನಿಲ್ದಾಣ ನಿರ್ಮಾಣದ ಹಂತದಲ್ಲಿದೆ. ಇದರ ಜೊತೆ ಜೊತೆ ಇದರೊಂದಿಗೆ ಇತರೆ ಸೌಲಭ್ಯಗಳಾದ ಉದ್ಯಾನ, ಕಾಯ್ದಿಟ್ಟ ಜಾಗ, ವಾಹನ ನಿಲುಗಡೆ ಜಾಗ ಇವುಗಳನ್ನು ದಗಿಸಲಾಗಿದೆ. ಈ ಕೈಗಾರಿಕೋದ್ಯಮ ಪ್ರದೇಶವು ಅಂತರಿಕ್ಷಯಾನದ ಭಾಗಗಳ ತಯಾರಿಕಾ ಕಾರ್ಖಾನೆ ರಕ್ಷಣಾ ಉದ್ಯಮ ಸ್ಥಾಪನೆ ಯೋಗ್ಯವಾಗಿರುವುದಾಗಿದೆ. ಇಲ್ಲಿ ಸ್ಥಾಪಿತಗೊಂಡಿರುವ ಪ್ರಮುಖ ಉದ್ಯಮಗಳೆಂದರೆ ಐಟಿ ಉದ್ಯಮ, ರಕ್ಷಣಾ ಉದ್ಯಮ, ಅಮದಾ, ವಿಪ್ರೋ, ಟೈಕೋ, ಶೆಲ್, ಥೆಸೆನ್ಕ್ರಪ್, ಸ್ಟಾರ್ರಾನ್, ಭಾರತ.
2 ಅಪ್ಯಾರಲ್ ಉದ್ಯಾನವನ 1 ನೇ ಮತ್ತು 2 ನೇ ಹಂತ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ. ಅಪ್ಯಾರಲ್ ಉದ್ಯಾನವನ 1 ನೇ ಮತ್ತು 2 ನೇ ಹಂತ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ 452 ಎಕರೆಗಳಲ್ಲಿ ವಿಸ್ತಾರವಾಗಿ ಅಭಿವೃದ್ಧಿಗೊಂಡಿದೆ. ಇದು ದೊಡ್ಡಬಳ್ಳಾಪುರದಿಂದ 5 ಕಿ.ಮೀ ದೂರದಲ್ಲಿ ಮತ್ತು ಯಲಹಂಕಾ (NH-7 & SH-9) ಮೂಲಕ ಬೆಂಗಳೂರಿನಿಂದ 38 ಕಿಮೀ ದೂರದಲ್ಲಿದೆ. ಇದಕ್ಕೆ ಸಮೀಪದ ವಿಮಾನ ನಿಲ್ದಾಣ ಎಂದರೆ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣ ಇದು 22 ಕಿ.ಮೀ. ಮತ್ತು ರೈಲ್ವೆ ನಿಲ್ದಾಣವು ಕೈಗಾರಿಕಾ ಪ್ರದೇಶಕ್ಕೆ ವಿರುದ್ಧ ದಿಕ್ಕಿನಲ್ಲಿದೆ. ಈ ಕೈಗಾರಿಕಾ ಪ್ರದೇಶಕ್ಕೆ ಬಹುಮಾರ್ಗ ಪ್ರವೇಶಕ್ಕೆ, ವಿದ್ಯುತ್ ಸರಬರಾಜು ಮತ್ತು ಬೀದಿ ದೀಪಗಳಿಗೆ ಭೂಗತ ಕೇಬಲ್ ಗಳ ಸಂಪರ್ಕ ನೀಡಲಾಗಿದೆ. ಮತ್ತು ನೀರು ಸರಬರಾಜಿಗೆ ಕೊಳವೆ ಮಾರ್ಗಗಳನ್ನು ಒದಗಿಸಲಾಗುತ್ತದೆ. ಇದರೊಂದಿಗೆ ಸಿ.ಇ.ಟಿ.ಪಿ ಯನ್ನು ಹೆಚ್ಚುವರಿಯಾಗಿ ಅಪ್ಯಾರಲ್ ಉದ್ಯಾನವನದಲ್ಲಿ ಮೊದಲ ಹಂತದಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ಪ್ರಮುಖವಾಗಿ ಇರುವ ಕೈಗಾರಿಕೋದ್ಯಮಗಳೆಂದರೆ M/s. ಬಿ.ಆರ್.ಎಫ್.ಎಲ್.,. M/s ಎವರ್ ಬ್ಲೂ, M/s ಟೆಕ್ಸ್ಟ್ ಪೋರ್ಟ್ ಇವುಗಳ ಜೊತೆಗೆ ಈ ಪ್ರೇದಶದಲ್ಲಿ ಫ್ಯಾಷನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಸಹ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಯೇ ಕೇಂದ್ರ ಸರ್ಕಾರವು ಪ್ರಾಯೋಜಿಸಿದ ದೊಡ್ಡಬಳ್ಳಾಪುರ ಇಂಟಿಗ್ರೇಟೆಡ್ ಟೆಕ್ಸ್ ಟೈಲ್ ಪಾರ್ಕ್ ಸಹ ಇದೆ. ಕೈಗಾರಿಕೆ ಸಂಬಂಧಿತ ಕೈಗಾರಿಕೆಗಳಿಗೆ ಕೈಗಾರಿಕಾ ಪ್ರದೇಶವು ಸೂಕ್ತವಾಗಿರುತ್ತದೆ.
3 ಒಬೆದನಹಳ್ಳಿ ಕೈಗಾರಿಕಾ ಪ್ರದೇಶ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಒಬೆದನಹಳ್ಳಿ ಕೈಗಾರಿಕಾ ಪ್ರದೇಶ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಪ್ಯಾರೆಲ್ ಉದ್ಯಾನವನಕ್ಕೆ ಸೇರಿಕೊಂಡಂತೆ ಸ್ಥಾಪಿಸಲಾಗಿದೆ. ಈ ಕೈಗಾರಿಕಾ ಪ್ರದೇಶ 696 ಎಕರೆ ವ್ಯಾಪ್ತಿಯನ್ನು ಹೊಂದಿದೆ. ಈ ಕೈಗಾರಿಕಾ ಪ್ರದೇಶದಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಈ ಕೈಗಾರಿಕಾ ಪ್ರದೇಶವು ಸಾಮಾನ್ಯ ಕೈಗಾರಿಕೆಗಳನ್ನು ಸ್ಥಾಪಿಸಲು ಸೂಕ್ತವಾಗಿರುತ್ತದೆ.
4. ನರಸಪುರ ಕೈಗಾರಿಕಾ ಪ್ರದೇಶ, ಜಲಸಂದ್ರ ಕೈಗಾರಿಕಾ ಪ್ರದೇಶ, ವೇಮಗಲ್ ಕೈಗಾರಿಕಾ ಪ್ರದೇಶ, ಕೋಲಾರ ಜಿಲ್ಲೆ
  • ನರಸಪುರ ಕೈಗಾರಿಕಾ ಪ್ರದೇಶ 700.75 ಎಕರೆ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕೈಗಾರಿಕಾ ಪ್ರದೇಶವು NH-4 ಅನ್ನು ಕೊಲಾರ್ ಪಟ್ಟಣದಿಂದ 15 ಕಿಮೀ ಮತ್ತು ಬೆಂಗಳೂರು ನಗರದಿಂದ 55 ಕಿ.ಮೀ.ನಲ್ಲಿದೆ. ಇದಕ್ಕೆ ಹತ್ತಿರದ ವಿಮಾನ ನಿಲ್ದಾಣ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕೈಗಾರಿಕಾ ಪ್ರದೇಶದಿಂದ 32 ಕಿಮೀ ದೂರದಲ್ಲಿದೆ. ಕೈಗಾರಿಕಾ ಪ್ರದೇಶವು ಕೋಲಾರ ಮತ್ತು ಮಲೂರಿನ ರೈಲು ನಿಲ್ದಾಣಕ್ಕೆ ಸಂಪರ್ಕ ಹೊಂದಿದೆ, ಇದು ಕೈಗಾರಿಕಾ ಪ್ರದೇಶದ ಎರಡೂ ಕಡೆಗಳಲ್ಲಿ 15 ಕಿಮೀ ಅಂತರದಲ್ಲಿದೆ. ಕೈಗಾರಿಕಾ ಪ್ರದೇಶದ ಬಹುಮಾರ್ಗದ ಪ್ರವೇಶದ್ವಾರದಲ್ಲಿ, ವಿದ್ಯುತ್ ಸರಬರಾಜು ಮತ್ತು ಬೀದಿ ದೀಪಗಳಿಗೆ ಭೂಗತ ಕೇಬಲ್ ಗಳು ಪೋರ್ಟಬಲ್ ಮತ್ತು ತೃತೀಯ ಸಂಸ್ಕರಣಾ ನೀರಿಗಾಗಿ ಉಭಯ ನೀರಿನ ಸರಬರಾಜು ಕೊಳವೆ ಮಾರ್ಗದೊಂದಿಗೆ ಅಳವಡಿಸಲಾಗಿದೆ. ಅಸ್ತಿತ್ವದಲ್ಲಿರುವ ಸಬ್ ಸ್ಟೇಷನ್ 32 ಎಂ.ಡಬ್ಲ್ಯೂ ಗೆ ನಿರಂತರ ವಿದ್ಯುತ್ ಸರಬರಾಜಿಗೆ ಅಳವಡಿಸಲಾಗಿದೆ. ಮತ್ತು ಕೈಗಾರಿಕಾ ಪ್ರದೇಶದ 220/56/11 ಕೆವಿ ಉಪ ನಿಲ್ದಾಣವನ್ನು ಕೆ.ಐ.ಎ.ಡಿ.ಬಿ ನಿರ್ಮಿಸಲು ಯೋಜಿಸಿದೆ. ಇದಲ್ಲದೆ, ಪಾರ್ಕ್, ಬಫರ್ ವಲಯ, ಪಾರ್ಕಿಂಗ್ ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ. ಕೈಗಾರಿಕಾ ಪ್ರದೇಶದಲ್ಲಿ M / s ಹೋಂಡಾ, M/s ಸ್ಕ್ಯಾನಿಯಾ, M/s ಮಹೀಂದ್ರ ಈಗಾಗಲೇ ತಮ್ಮ ಘಟಕಗಳನ್ನು ಸ್ಥಾಪಿಸಿದ್ದಾರೆ. ಹೆಚ್ಚಿನ ವಾಹನ ಸಂಬಂಧಿತ ಕೈಗಾರಿಕೆಗಳ ಸ್ಥಾಪನೆಯು ಪ್ರಗತಿಯಲ್ಲಿದೆ. ಈ ಕೈಗಾರಿಕಾ ಪ್ರದೇಶವು ಅತ್ಯುತ್ತಮ ಆಟೋಮೊಬೈಲ್ ಮತ್ತು ಜನರಲ್ ಇಂಡಸ್ಟ್ರೀಸ್. ಮೇಲೆ 16 ಎಕರೆ ವ್ಯಾಪ್ತಿಯಲ್ಲಿ ಗೃಹ ಉಪಯೋಗಿ ವಾಸಯೋಗ್ಯ ಬಡಾವಣೆಯನ್ನು ಕೆ.ಐ.ಎ.ಡಿ.ಬಿ ಅಭಿವೃದ್ಧಿಪಡಿಸಿದೆ.
  • ಜಕ್ಕಸಂದ್ರ ಕೈಗಾರಿಕಾ ಪ್ರದೇಶವು ನರಸಪುರ ಕೈಗಾರಿಕಾ ಪ್ರದೇಶದ ಹತ್ತಿರದಲ್ಲಿದೆ. ಈ ಕೈಗಾರಿಕಾ ಪ್ರದೇಶದಲ್ಲಿ ಬಹುಉಪಯೋಗಿ ಮಾರ್ಗ ಹೊಂದಿದ್ದು, ವಿದ್ಯುತ್ ಸರಬರಾಜು ಮತ್ತು ಬೀದಿ ದೀಪಗಳಿಗೆ ಭೂಗತ ಕೇಬಲ್ ಗಳು ಪೋರ್ಟಬಲ್ ಮತ್ತು ತೃತೀಯ ಸಂಸ್ಕರಣಾ ನೀರಿಗಾಗಿ ಉಭಯ ನೀರಿನ ಸರಬರಾಜು ಕೊಳವೆ ಮಾರ್ಗದೊಂದಿಗೆ ಅಳವಡಿಸಲಾಗಿದೆ. ಇದಲ್ಲದೆ, ಪಾರ್ಕ್, ಬಫರ್ ವಲಯ, ಪಾರ್ಕಿಂಗ್ ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ. ಈ ಕೈಗಾರಿಕಾ ಪ್ರದೇಶದಲ್ಲಿ M/s. ಇಎಸ್ಟಿ ಟ್ರಾಕ್ಟರ್ಸ್ & ಟ್ರಲ್ಲರ್ಸ್, M/s. ಅಶಿರ್ವಾದ್ ಪೈಪ್ಸ್ ತಮ್ಮ ಘಟಕಗಳನ್ನು ಸ್ಥಾಪಿಸಿದೆ. ಈ ಕೈಗಾರಿಕಾ ಪ್ರದೇಶ ಅತ್ಯುತ್ತಮ ಆಟೋಮೊಬೈಲ್ ಮತ್ತು ಸಾಮಾನ್ಯ ಕೈಗಾರಿಕೆಗಳಿಗೆ ಸೂಕ್ತವಾಗಿದೆ.
  • ವೆಮಾಗಲ್ ಕೈಗಾರಿಕಾ ಪ್ರದೇಶವು ಕೋಲಾರ-ಚಿಕ್ಕಬಳ್ಳಾಪುರ ರಸ್ತೆ (SH-96) ಸೇರಿಕೊಂಡಂತೆ ಇದೆ, ಇದು ನರಸಪುರ ಮತ್ತು ಜಕ್ಕಾಸಂದ್ರ ಕೈಗಾರಿಕಾ ಪ್ರದೇಶದಿಂದ ಸುಮಾರು 10 ಕಿಮೀ ದೂರದಲ್ಲಿದೆ. ಈ ಕೈಗಾರಿಕಾ ಪ್ರದೇಶದ ವ್ಯಾಪ್ತಿಯು 666 ಎಕರೆ. ಈ ಕೈಗಾರಿಕಾ ಪ್ರದೇಶದಲ್ಲಿ ಬಹು ಉಪಯೋಗಿ ಪ್ರವೇಶದೊಂದಿಗೆ, ವಿದ್ಯುತ್ ಸರಬರಾಜು ಮತ್ತು ಬೀದಿ ದೀಪಗಳಿಗೆ ಭೂಗತ ಕೇಬಲ್ ಗಳು ಪೋರ್ಟಬಲ್ ಮತ್ತು ತೃತೀಯ ನೀರಿಗಾಗಿ ಉಭಯ ನೀರಿನ ಸರಬರಾಜು ಕೊಳವೆ ಮಾರ್ಗದೊಂದಿಗೆ ಅಳವಡಿಸಲಾಗಿದೆ. ಸಾಮಾನ್ಯ ಸೌಲಭ್ಯಗಳಾದ ಉದ್ಯಾನವನ, ಬಫರ್ ವಲಯ, ಪಾರ್ಕಿಂಗ್ ಗಳನ್ನು ಸಹ ಒದಗಿಸಲಾಗಿದೆ. ಈ ಕೈಗಾರಿಕಾ ಪ್ರದೇಶ ಅತ್ಯುತ್ತಮ ಆಟೋಮೊಬೈಲ್ ಮತ್ತು ಸಾಮಾನ್ಯ ಕೈಗಾರಿಕೆಗಳಿಗೆ ಸೂಕ್ತವಾಗಿದೆ.
5. ಮಾಲುರ್ ಕೈಗಾರಿಕಾ ಪ್ರದೇಶ 1, 2, 3, 4ನೇ ಹಂತ, ಕೋಲಾರ ಜಿಲ್ಲೆ ಮಾಲೂರ್ ಕೈಗಾರಿಕಾ ಪ್ರದೇಶವನ್ನು 917 ಎಕರೆಗಳ ವಿಸ್ತಾರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರಿನ ನಡುವೆ ಹೊಸಕೋಟೆ (NH-4) ಮೂಲಕ ಮಾಲೂರಿಗೆ (SH-95) ಸುಮಾರು 51 ಕಿ.ಮೀ. ಅಂತರವಿದೆ. ಇದಕ್ಕೆ ಸಮೀಪದ ವಿಮಾನ ನಿಲ್ದಾಣ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣ. ಇದು 48 ಕಿ.ಮೀ. ಕೈಗಾರಿಕಾ ಪ್ರದೇಶವು ಮಾಲೂರ್ ಪಟ್ಟಣದಲ್ಲಿನ ರೈಲು ನಿಲ್ದಾಣದೊಂದಿಗೆ ಸಂಪರ್ಕ ಹೊಂದಿದೆ. ಕೈಗಾರಿಕಾ ಪ್ರದೇಶವು ವಿದ್ಯುತ್ ಸರಬರಾಜು ಮತ್ತು ಬೀದಿ ದೀಪಗಳಿಗೆ ಭೂಗತ ಕೇಬಲ್ ಗಳು ಮತ್ತು ನೀರಿಗಾಗಿ ಉಭಯ ನೀರಿನ ಸರಬರಾಜು ಕೊಳವೆ ಮಾರ್ಗದೊಂದಿಗೆ ಅಳವಡಿಸಲಾಗಿದೆ. 220 KV ಸಬ್ ಸ್ಟೇಷನ್ ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. ಸಾಮಾನ್ಯ ಸೌಲಭ್ಯಗಳಾದ ಪಾರ್ಕ್, ಬಫರ್ ವಲಯ, ಪಾರ್ಕಿಂಗ್ ಸಹ ಒದಗಿಸಲಾಗಿದೆ. ಈ ಕೈಗಾರಿಕಾ ಪ್ರದೇಶದಲ್ಲಿ M/s ಬಯೋವೆಟ್ ಪ್ರೈವೇಟ್. ಲಿಮಿಟೆಡ್ M/s ಇನ್ನೋವಾ ಅಗ್ರಿಬಯೋ ಪಾರ್ಕ್ ಲಿಮಿಟೆಡ್. M/s ಕೋಟಾ ಅಸೋಸಿಯೇಟ್ಸ್ ಈಗಾಗಲೇ ತಮ್ಮ ಘಟಕಗಳನ್ನು ಸ್ಥಾಪಿಸಿವೆ. ಹಲವು ಸಂಬಂಧಿತ ಕೈಗಾರಿಕೆಗಳ ಸ್ಥಾಪನೆಯು ಪ್ರಗತಿಯಲ್ಲಿದೆ. ಈ ಕೈಗಾರಿಕಾ ಪ್ರದೇಶದ ಸಾಮಾನ್ಯ ಕೈಗಾರಿಕೆಗಳಿಗೆ ಸೂಕ್ತವಾಗಿದೆ.
6. ಗೌರಿಬಿದನೂರು ಕೈಗಾರಿಕಾ ಪ್ರದೇಶ 1 ಮತ್ತು 2 ನೇ ಹಂತ, ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ಕೈಗಾರಿಕಾ ಪ್ರದೇಶ 1 ಮತ್ತು 2 ನೇ ಹಂತವನ್ನು 692 ಎಕರೆ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರಿನಿಂದ ದೊಡ್ಡಬಳ್ಳಾಪುರದ ಮೂಲಕ ಕೈಗಾರಿಕಾ ಪ್ರದೇಶಕ್ಕೆ (SH-9) 87 ಕಿ.ಮೀ. ದೂರದಲ್ಲಿದೆ. ಮತ್ತು ಚಿಕ್ಕಬಳ್ಳಾಪುರದಿಂದ NH 234 ಮತ್ತು SH-9 ಮೂಲಕ 45 ಕಿ.ಮೀ. ದೂರದಲ್ಲಿದೆ. ಇದಕ್ಕೆ ಹತ್ತಿರದ ರೈಲು ನಿಲ್ದಾಣವು ಕೈಗಾರಿಕಾ ಪ್ರದೇಶದಿಂದ 10 ಕಿ.ಮೀ ದೂರದಲ್ಲಿದೆ. ಸಮೀಪದ ವಿಮಾನ ನಿಲ್ದಾಣ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 53 ಕಿ.ಮೀ. ಕೈಗಾರಿಕಾ ಪ್ರದೇಶದ ಅಂತರದಲ್ಲಿದೆ. ಬಹುಉಪಯೋಗಿ ಎಕ್ಸೆಸ್ ರಸ್ತೆ ಮತ್ತು ವಿದ್ಯುತ್ ಸರಬರಾಜು ಮತ್ತು ಬೀದಿ ದೀಪಗಳಿಗಾಗಿ ಭೂಗದ ಕೇಬಲ್, ಉಬಯ ನೀರು ಸರಬರಾಜು ಕೊಳವೆ ಮಾರ್ಗಗಳನ್ನು ಒದಗಿಸಲಾಗಿದೆ. ಅನೇಕ ಸ್ಟೀಲ್ ಕೈಗಾರಿಕೆಗಳು ತಮ್ಮ ಘಟಕಗಳನ್ನು ಸ್ಥಾಪಿಸುತ್ತಿವೆ. ಇದರೊಂದಿಗೆ M/s ಅಜಾಕ್ಸ್ ಫ್ಲೋರಿಂಗ್, M/s. ಜಾಕೀ ತಮ್ಮ ಘಟಕಗಳನ್ನು ಸ್ಥಾಪಿಸಲಿವೆ. ಇದರೊಂದಿಗೆ M/s ರಿಲಯನ್ಸ್ ಜೊತೆಗೆ ಅವರ ಸಿಮೆಂಟ್ ಗ್ರೈಂಡಿಂಗ್ ಮತ್ತು ಪ್ಯಾಕಿಂಗ್ ಘಟಕವನ್ನು ಸ್ಥಾಪಿಸಲಿವೆ. ಈ ಕೈಗಾರಿಕಾ ಪ್ರದೇಶವು ಎಲ್ಲಾ ರೀತಿಯ ಕೈಗಾರಿಕೆಗಳಿಗೆ ಸೂಕ್ತವಾಗಿದೆ.
7. ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶ, ಚಿಕ್ಕಬಳ್ಳಾಪುರ ಜಿಲ್ಲೆ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶವು ಬೆಂಗಳೂರಿನಿಂದ ಹೊಸಕೋಟೆ (NH-4) ಮತ್ತು ಹೊಸಕೋಟೆ-ಚಿಂತಾಮಣಿ ರಸ್ತೆ (SH-82) ಮೂಲಕ 65 ಕಿ.ಮೀ ದೂರದಲ್ಲಿದೆ. ಈ ಉದ್ದೇಶಿತ ಕೈಗಾರಿಕಾ ಪ್ರದೇಶವು ನರಸಪುರ ಕೈಗಾರಿಕಾ ಪ್ರದೇಶದಿಂದ ಸುಮಾರು 28 ಕಿಮೀ ದೂರದಲ್ಲಿದೆ. ರೈಲು ನಿಲ್ದಾಣವನ್ನು ಹೊಂದಿರುವ ಚಿಂತಾಮಣಿ ಪಟ್ಟಣವು ಕೈಗಾರಿಕಾ ಪ್ರದೇಶದಿಂದ 12 ಕಿಮೀ ದೂರದಲ್ಲಿದೆ. ಶ್ರೀ ಯೋಗಿ ನಾರಾಯಣ ಮಠ, ಕೈವಾರ SH-82 4 ಕಿ.ಮೀ. ಅಂತರದಲ್ಲಿದೆ. ಸಮೀಪದ ವಿಮಾನ ನಿಲ್ದಾಣ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಸುಮಾರು 32 ಕಿ.ಮೀ. ದೂರದಲ್ಲಿದ್ದು, 516 ಎಕರೆ ಭೂಮಿಯನ್ನು ಎಲ್ಲಾ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲು ಪ್ರಸ್ತಾಪಿಸಲಾಗಿದೆ.